21st August 2024
ಲಿಂಗಸುಗೂರ ; ನಾಲ್ಕು ದಶಕಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಸ್.ಡಿ.ಎಸ್. ಯೋಜನೆ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯದಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕೀಯರು 3 ತಿಂಗಳು ಬಾಕಿ ಗೌರವಧನ ಹಾಗೂ ಹಲವು ಬೇಡಿಕೆಗಳನ್ನು ಸರಕಾರ ಕೂಡಲೆ ಈಡೆರಿಸಲು ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಮನವಿ ಪತ್ರವನ್ನು ಸಹಾಯಕ ಅಯುಕ್ತರಿಗೆ ಸಿ.ಐ.ಟಿ.ಯು ತಾಲೂಕು ಅಧ್ಯಕ್ಷೆ, ಸರಸ್ವತಿ ಈಚನಾಳ ನೇತೃತ್ವದಲ್ಲಿ ಕಾರ್ಯಕರ್ತೆ ಮನವಿ ಪತ್ರವನ್ನು ಸಲ್ಲಿಸಲಾಯಿತು .
ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು 2023 ಫೆಬ್ರವರಿ ೦3 ರಂದು ಘೋಶಿಸಿದ ಹೆಚ್ಚುವರಿ ಗೌರವಧನ ಹಾಗೂ ರಾಜ್ಯ ಪ್ರಸ್ತುತ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಜುಲೈ- 2023ರಂದು ಘೋಷಿಸಿದ ಗೌರವಧನ ಹಾಗೂ 6ನೇ ಗ್ಯಾರಂಟಿಯಾಗಿ 15 ಸಾವಿರ ರೂಪಾಯಿ ಹೆಚ್ಚಿಸುವುದಾಗಿ ಭರವಸೆ ನೀಡಿದರು
ತಕ್ಷಣ ಜಾರಿ ಮಾಡಬೇಕು ಹಾಗೂ ಮೊಟ್ಟೆ ವಿತರಣೆ ಮಾಡಲು ಬಾಲ ವಿಕಾಸ ಸಮಿತಿಗೆ ಮುಂಗಡ ಹಣ ಜಮಾ ಮಾಡುವಂತೆ ಸರಕಾರದ ಆದೇಶವಿದ್ದು, ಅದನ್ನು ಪಾಲನೆ ಮಾಡಬೇಕು 2-3 ತಿಂಗಳು ಕಳೆದರೂ ಮೊಟ್ಟೆಯ ಹಣ ವಿತರಣೆ ಮಾಡಿರುವುದಿಲ್ಲಇದರಿಂದ ಕಾರ್ಯಕರ್ತೆಯರಿಗೆ ಫಲಾನುಭವಿಗಳಿಗೆ ತೊಂದರೆಯಾಗಿದ್ದು ಕೂಡಲೆ ಸರಿಪಡಿಸಬೇಕು
ಸುಪ್ರೀಂ ಕೋರ್ಟ ಆದೇಶದಂತೆ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕೀಯರಿಗೆ 1972 ರ ಆದೇಶದ ಗ್ರಾಜ್ಯುಟಿ ಕಾಯ್ದೆಯಂತೆ ನಿವೃತ್ತಿ ಯಾದವರಿಗೆ ಮೊದಲು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಆಹಾರ ಧಾನ್ಯಗಳ ಗುಣಮಟ್ಟದಲ್ಲಿ ಬಹಳ ಅಸಮರ್ಪಕವಿದ್ದು ಬೆಲ್ಲ ರವಾ ಇತ್ಯಾದಿ ಆಹಾರ
ಧಾನ್ಯಗಳ ಪೂರೈಕೆ ನಿಗದಿತ ಅವಧಿಯ ಒಳಗೆ ತೂಕ ಅಳತೆ ನಿಯಮಾನುಸಾರ ಕೊಡ ಬೇಕು ಮತ್ತು ಎಲ್.ಕೆ.ಯು.ಕೆ.ಜಿ. ಅಂಗನವಾಡಿ ಕೇಂದ್ರದಲ್ಲಿ ಪ್ರಾರಂಭಿಸಿ ಅರ್ಹ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿರಿರುವರು.
ಈ ಸಂದರ್ಭದಲ್ಲಿ ಮಹೇಶ್ವರಿ ಹಟ್ಟಿ ಸುಮಿತ್ರ ಗುರುಗುಂಟ ಸಂಗಯ್ಯ ಸ್ವಾಮಿ ಹನಿಫ ಮಲ್ಲನಗೌಡ ಮುದಗಲ್ ವಿಜಯ ಲಕ್ಷ್ಮಿ ಶ್ಯಾವಂ ನಾಗರತ್ನ ರೊಡಲಬಂಡಾ ಬಾಬಾ ಜಾನಿ ಹಾಗೂ ಇತರರು ಇದ್ದರು.