
8th January 2025
ನಾಗಮಂಗಲ: ಸಾಲಾದ್ರಿ ಶ್ರೀ ಕ್ಷೇತ್ರ ಕೋಟೆ ಬೆಟ್ಟದ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ 18ನೇ ವರ್ಷದ ವೈಕುಂಠ ಏಕಾದಶಿ ಅದ್ದೂರಿ ಕಾರ್ಯಕ್ರಮ ಜರುಗಲಿದೆ.
ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಶ್ರೀ ಸಾಲಾದ್ರಿ ಶ್ರೀ ಕ್ಷೇತ್ರ ಕೋಟೆ ಬೆಟ್ಟ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ 18ನೇ ವರ್ಷದ ವೈಕುಂಠ ಏಕಾದಶಿಯ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಲಿದ್ದು ಜನವರಿ 9 ಮತ್ತು 10 ಜರುಗಲಿದ್ದು ಭಕ್ತಾದಿಗಳು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ತಿಳಿಸಿದ್ದಾರೆ.