11th November 2024
ಪುಸ್ತಕಗಳು ಎಂದೆಂದೂ ಚಿರಾಯು.
ಡಾ. ಅಮರಸಿದ್ಧೇಶ್ವರ ಮಹಾಸ್ವಾಮಿಗಳು
ಅಂಕಲಗಿ. ೧೦- ಬದುಕಿನಿಂದ ದೂರ ಸರಿಯುವ ನಾವು ಚಿರಾಯು ವಾಗುವಂಥ ಸತ್ಕಾರ್ಯ ನಮ್ಮಿಂದಾಗಬೇಕು. ಜನ್ಮ ಸಾರ್ಥಕಕ್ಕೆ ಮುಂದಾಗಬೇಕು ಎಂದು ಅಂಕಲಗಿ ಅಡವಿಸಿದ್ದೇಶ್ವರ ಮಠದ ಮಠಾಧ್ಯಕ್ಷರಾದ ಡಾ ಅಮರಸಿದ್ಧೇಶ್ವರ ಶ್ರೀಗಳು ಹೇಳಿದರು. ಅವರು ಶನಿವಾರ ಸಂಜೆ ಅಂಕಲಗಿ ಮಠದಲ್ಲಿ ಶೈಲಾ ಎಸ್ ಗುಂಡಣ್ಣವರ ರಿಂದ ರಚಿತ ಗುರುವಂದನಾ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಳನ ಪುಸ್ತಕ ಬಿಡುಗಡೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಇಂದಿನ ಆಧುನಿಕತೆ ಭರಾಟೆಯಲ್ಲಿ ಸಂಭಂದಗಳು, ಆತ್ಮೀಯತೆಗಳು ಕಾಣದಾಗಿದ್ದು, ಹಳೇ ವಿದ್ಯಾರ್ಥಿಗಳ ಈ ಸಮ್ಮಿಲನ ಅತ್ಯಂತ ಖುಷಿ ತರಿಸುವ ಸುದಿನವಾಗಿದೆ. ಶೈಲಾ ರ ಈ ಪುಸ್ತಕ ಸ್ನೇಹಿತರ ಮತ್ತು ಗುರು ಶಿಷ್ಯರ ಸಂಭಂದಗಳನ್ನು ನೆನಪಿಸುವ
ಮೌಲ್ಯಯುತ ಪುಸ್ತಕ ಇದಾಗಿದೆ ಎಂದರಲ್ಲದೆ ಶೈಲಾರನ್ನು ಸನ್ಮಾನಿಸಿ ಗೌರವಿಸಿದರು.
ಶೈಲಾ ಮಾತನಾಡಿ, ನನ್ನಲ್ಲಿರುವ ಇಲ್ಲಿಯ ಕಲಿತ ಮತ್ತು ಅನುಭವಿಸಿದ ಸಂದರ್ಭಗಳನ್ನು ಹೊಸೆದು ಈ ಪುಸ್ತಕ ರೂಪಿಸಿದ್ದು , ನನಗೆ ಸಂತಸ ತಂದಿದೆ ಎಂದರಲ್ಲದೆ, ಸೇರಿದ ಎಲ್ಲ ಹಳೇ ಸ್ನೇಹಿತರಿಗೆ ಧನ್ಯವಾದ ಹೇಳಿದರು.
ವೇದಿಕೆಯಲ್ಲಿದ್ದ ಡಾ ಅಮರಸಿದ್ಧೇಶ್ವರ ಶ್ರೀಗಳು, ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜೇಂದ್ರ ಗೌಡಪ್ಪಗೋಳ, ಶೈಲಜಾ ಗುಂಡಣ್ಣವರ, ಮಂಗಳಾ ಪಾಶ್ಚಾಪುರೆ, ಸುನಿಲ್ ಖತಗಲ್ಲಿ, ಮಂಗಳಾ ಕಾಪ್ಸೆ ,ಅಡವೇಶ ಮುನವಳ್ಳಿ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಜಾಹಿರ ಅಬ್ಬಾಸ ಖೋತವಾಲ್, ಜ್ಯೋತಿ ಪಾಶ್ಚಾಪುರೆ, ಬಸಲಿಂಗವ್ವಾ ಕೊಳವಿ, ಗಂಗಪ್ಪಾ ಅಂಗಡಿ, ಬಸಲಿಂಗಪ್ಪಾ ಗುಡದವರ, ಗಣಪತಿ ಬಡಿಗೇರ, ಸಿದ್ರಾಮ ಕುಂಬಾರ, ಎಸ್ ಎ ಪಿ ಯು ಕಾಲೇಜಿನ ೯೧ ಸಾಲಿನ ಹಳೆಯ ವಿದ್ಯಾರ್ಥಿಗಳು ಉಪಸ್ತಿತರಿದ್ದರು.
ಜ್ಯೋತಿ ಪಾಶ್ಚಾಪುರೆ ಪ್ರಾರ್ಥಿಸಿದರು. ದುರ್ಗಾಪ್ರಸಾದ ಬಂಡಿವಡ್ಡರ ನಿರೂಪಿಸಿದರು
ರಾಜೇಂದ್ರ ಗೌಡಪ್ಪಗೋಳ ವಂದಿಸಿದರು.
, ಸುರೇಶ ಉರಬಿನಹಟ್ಟಿ
ಶ್ರೀ ದುರ್ಗಾ ಫಿಲ್ಮ್ಸ್ ಬ್ಯಾನರ್ ನಲ್ಲಿ "ನವಿಲುಗೆಜ್ಜೆ " ಎಂಬ ಕಿರು ಚಿತ್ರದ ಟೈಟಲ್ ಬಿಡುಗಡೆ ಅಂಬೆಡ್ಕರ್ ಉದ್ಯಾನವನದಲ್ಲಾಯಿತು...
ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟ, ಕಾಮನಕಟ್ಟಿಗೆ 4 ಲಕ್ಷ ರೂಪಾಯಿಗಳ ಚೆಕ್ ವಿತರಣೆ