22nd December 2024
ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಗೆ ರಾಮತೀರ್ಥನಗರದಲ್ಲಿ ಅದ್ದೂರಿ ಸನ್ಮಾನ.
ಸ್ಟಾರ್ ಸುವರ್ಣ ವಾಹಿನಿಯ ಸುವರ್ಣೋತ್ಸವ ಕಾರ್ಯಕ್ರಮ.
ಬೆಳಗಾವಿ ೨೧- ಸ್ಟಾರ್ ಸುವರ್ಣ ದ ಸುವರ್ಣೋತ್ಸವ ಕಾರ್ಯಕ್ರಮಕ್ಕೆ ಬೆಳಗಾವಿ ರಾಮತೀರ್ಥ ನಗರದ ಸಂಕಲ್ಪ ಗಾರ್ಡನ್ ಹಾಲ್ ಗೆ ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಕಾರ ಇಳಿದು ಕುಣಿ,ಕುಣಿಯುತ್ತ ಆಗಮಿಸುತ್ತಿದ್ದಂತೆ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ವತಿಯಿಂದ ಭವ್ಯಸನ್ಮಾನದೊಂದಿಗೆ ಸ್ವಾಗತ ನೀಡಿ ಗೌರವಿಸಲಾಯಿತು.
ವೇದಿಕೆಯ ಮುಂಬಾಗಿಲಿನಲ್ಲಿಯ ಸ್ವಾಗತ ಕಾಮನ ಎರಡೂ ಬದಿಯಲ್ಲಿ ನಿಂತಿದ್ದ ರಾಮತೀರ್ಥನಗರ ದ ಮಹಿಳಾ ಗೌರಿ ದಾಂಡಿಯಾ ಸಂಘದ ಮಹಿಳೆಯರು ಹೂ ಮಳೆಗರೆದು ಸಿಹಿ,ಕಹಿ ಚಂದ್ರುಗೆ ಸ್ವಾಗತಿಸಿದರಲ್ಲದೆ, ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಸುರೇಶ ಉರಬಿನಟ್ಟಿ, ಚಂದ್ರು ಅವರನ್ನು ಸನ್ಮಾನಿಸಿ ಗೌರವಿಸಿದರು . ಸುಮಾರು ೧ ಗಂಟೆಗೂ ಹೆಚ್ಚು ಕಾಲ ವೇದಿಕೆಯಲ್ಲಿ ವಿಧ, ವಿಧದ ಅಡುಗೆ ಮಾಡಿ ಕೈ ಚಾಲಕ ತೋರಿಸಿದರಲ್ಲದೆ, ಪ್ರೇಕ್ಷಕರ ಹಲವಾರು ಪ್ರಶ್ನೆಗಳಿಗೆ ಸ್ಪಂದಿಸಿ, ಅಭಿಮಾನಿ ಸಹೋದರಿಯರೊಂದಿಗೆ ಸ್ಟೆಪ್ ಹಾಕಿ ಜನ,ಮನ ರಂಜಿಸಿ ಮಾತನಾಡಿ, ನನಗೆ ಬೆಳಗಾವಿ ಭೆಟ್ಟಿ ಅತ್ಯಂತ ಖುಷಿ ತಂದಿದೆ. ನಿಮ್ಮೊಂದಿಗಿನ ಈ ಸಮಯ ಕಳೆಯುವ ಸಂದರ್ಭ ನನಗೊದಗಿ ಬಂದಿದ್ದು, ಕುಂದಾ ರುಚಿಸುವದಕ್ಕೇನೆ ಇಲ್ಲಿಗೆ ಬಂದಿದ್ದು ಎಂದರು.
ದಿಗ್ವಿಜಯ ಸಿದ್ನಾಳ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಚಂದ್ರು ಅವರೊಬ್ಬ ಕರ್ನಾಟಕದ ಜನ,ಮನ ಗೆದ್ದ ಮಹಾನ ಪಾಕ ಶಾಸ್ತ್ರದ ಕಲಾವಿದ ಅವರ ಬೆಳಗಾವಿ ಭೆಟ್ಟಿ ನಮಗೆಲ್ಲ. ಮಹಾದಾನಂದ ಉಂಟು ಮಾಡಿದೆ ಎಂದರಲ್ಲದೆ, ಉಪಸ್ತಿತರಿದ್ದ ಬೆಳಗಾವಿ ಜನರಿಗೆ ಸ್ವಾಗತ ಕೋರಿ ಅಭಿನಂದಿಸಿದರು.
ಸ್ಟಾರ್ ಸುವರ್ಣ ವಾಹಿನಿ ಯಿಂದ ಪ್ರಸಾರಗೊಳ್ಳುತ್ತಿರುವ ಅಸೆ, ಎಡೆಯೂರು ಸಿದ್ಧಲಿಂಗೇಶ, ಉಧೋ,ಉಧೋ ಯಲ್ಲಮ್ಮ, ಬೊಂಬಾಟ್ ಬಾಡೂಟ, ನಿನ್ನ ಜೊತೆ ನನ್ನ ಕಥೆ, ಶ್ರೀದೇವಿ ಮಹಾತ್ಮೆ ಮುಂತಾದ ಜನಪ್ರಿಯ ಧಾರವಾಹಿಗಳ ನಟ,ನಟಿಯರು ಹಾಡು, ಗುಂಪು ನ್ರತ್ಯ, ಮಿಮಿಕ್ರಿ ಗಳನ್ನು ಮಾಡುವುದರ ಮೂಲಕ ಜನ,ಮನ ರಂಜಿಸಿದರು. ಲಕ್ಷ್ಮೀ, ಆನಂದ ಅಂಗಡಿ, ನಿರೂಪಕರಾದ ಪ್ರೀತಮ್ ಕಾರ್ಯಕ್ರಮ ಅಚ್ಚು,ಕಟ್ಟಾಗಿ ನಿರ್ವಹಿಸಿದರು. ಈ ಸಂದರ್ಭದಲ್ಲಿ
ಅಭಿಮಾನಿಗಳು, ಮಹಿಳೆಯರು ಸೇರಿದಂತೆ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ .. ಕಮಿಟಿ ಸದಸ್ಯರಾದ ಕ್ರಷ್ಣಾ ಪಾಟೀಲ, ಪ್ರಹ್ಲಾದ ಹೊಳೆಯಾಚಿ, ಅರ್ಜುನ್ ಉರಬಿನಹಟ್ಟಿ, ಮಂಜುನಾಥ, ಪಾಟೀಲ, ಮಹೇಶ ಪಾಟೀಲ, ಆರ್.ಜಿ. ಮೆಳವಂಕಿ, ಬಸವರಾಜ ಗೌಡಪ್ಪಗೋಳ, ಎಸ್, ಸಿ ಕಮತ್, ಸೇರಿದಂತೆ ಸ್ಟಾರ್ ಸುವರ್ಣ ಟೀಮ್ ನ ತಾಂತ್ರಿಕ ಸಿಬ್ಬಂದಿ, ಕಿರು ತೆರೆ ನಟ, ನಟಿಯರು ಉಪಸ್ತಿತರಿದ್ದರು.
ವರದಿ, ಸುರೇಶ ಉರಬಿನಟ್ಟಿ
ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಿ:-ಬಿ.ಫೌಜಿಯಾ ತರನ್ನುಮ್
ಶಿಕ್ಷಣದಿಂದ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಸಾಧ್ಯ :ಶಾಸಕ ತುನ್ನೂರ
ಜನಪದ ಸಾಹಿತ್ಯದ ತಾಯಿ ಬೇರು: ಹಮೀದಾ ಬೇಗಂ ದೇಸಾಯಿ ಪೃಥ್ವಿ ಫೌಂಡೇಶನ್ ದಿಂದ " ಜಾನಪದ ಸಂಭ್ರಮ" ಕಾರ್ಯಕ್ರಮ
ಗಣಿತ ವಿಜ್ಞಾನದ ತಾಯಿ ಬೇರು : ಪ್ರಾಚಾರ್ಯ ಎಂ. ಜಿ. ಹೆಗಡೆ ಗಣಿತ ವಿಜ್ಞಾನದ ತಾಯಿ ಬೇರು. ವೈಜ್ಞಾನಿಕ ಸಂಶೋಧನೆಯು ಗಣಿತದ ಮೇಲೆಯೇ ಅವಲಂಬಿಸಿದೆ ಎಂದು ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು ಅಭಿಪ್ರಾಯಪಟ್ಟರು.