14th March 2025
ರಾಮತೀರ್ಥನಗರದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಸಂಭ್ರಮಿಸಿದ ಹೋಳಿ
ಬೆಳಗಾವಿ. ೧೪- ಬೆಳಗಾವಿ ರಾಮತೀರ್ಥ ನಗರದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ವತಿಯಿಂದ ದೇವಸ್ಥಾನ ಬಳಿ ಜರುಗಿದ ಹೋಳಿ ಆಚರಣೆ ಅತೀ ಸಂಭ್ರಮ, ಸಡಗರದಿಂದ ನೆರವೇರಿತು. ಶುಕ್ರವಾರ ಮುಂಜಾನೆ ಸೇರಿದ ದೇವಸ್ಥಾನ ಕಮಿಟಿ ಸದಸ್ಯರು ಮತ್ತು ಶ್ರೀ ದುರ್ಗಾ ಮಹಿಳಾ ಮಂಡಳ ಸದಸ್ಯರು ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಗೆ ಪೂಜೆ ಸಲ್ಲಿಸಿ ಆಂಜನೇಯನಿಗೆ ಭಕ್ತಿ ಯಿಂದ ಸಂತಸ, ಸಡಗರದ ಕುರುಹು ಆದ ವಿವಿಧ ಬಣ್ಣಗಳನ್ನು ಎರಚಿ, ನಂತರ ಪರಸ್ಪರರು ಬಣ್ಣ ಎರಚಿ ಶುಭಾಶಯಗಳನ್ನು ಹಂಚಿಕೊಂಡರು.
ಸುಮಾರು ೩ ತಾಸಿಗೂ ಹೆಚ್ಚು ಕಾಲ ಮ್ಯುಜಿಕ್ ನ್ರತ್ಯ ಮಾಡಿ ಬಣ್ಣದ ಹೋಳಿ ಹಬ್ಬಕ್ಕೆ ಮೆರುಗು ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಟ್ಟಿ, ಕಾರ್ಯದರ್ಶಿ, ಮಂಜುನಾಥ ಪಾಟೀಲ, ಖಜಾಂಚಿ ಮನೋಹರ ಕಾಜಗಾರ ಸದಸ್ಯರಾದ
ಮಹೇಶ ಚಿಟಗಿ, ಕ್ರಷ್ಣಾ ಪಾಟೀಲ ಜೆ ಜಿ ಹುನ್ನೂರ, ಬಸವರಾಜ ಗೌಡಪ್ಪಗೋಳ, ಎಸ್, ಎಲ್ ಸನದಿ, ಆನಂದ ಹಣ್ಣಿಕೇರಿ, ಸಿದ್ದಪ್ಪ ತೇರಣಿ, ವಿಜಯಕುಮಾರ್ ಕನಕಗಿರಿ, ಮೆಳವಂಕಿ, ಚೆಳಗೇರಿ, ಮಹಾದೇವ ಟೊಣ್ಣೆ, ಗುರುಸಂಗಪ್ಪಾ ಚೆಳಗೇರಿ, ಜಿ ಐ ದಳವಾಯಿ ಮತ್ತು ಶ್ರೀ ದುರ್ಗಾ ಸಂಘದ ನಿರ್ಮಲಾ ಉರಬಿನಹಟ್ಟಿ , ಲತಾ ಕಾಜಗಾರ, ಕಾವ್ಯಾ ಚಿಟಗಿ, ಪ್ರೇಮಾ ಬಾಗೇವಾಡಿ, ಸುನೀತಾ ಕೆರೂರ, ವೀಣಾ ಪಾಟೀಲ, ಸೀಮಾ ಸುಬ್ಬಾಪೂರಮಠ, ಮಹಾದೇವಿ ಖಡಕಿ, ವರ್ಷಾ ಶೆಟ್ಟಿ ಸೇರಿದಂತೆ ಅಪಾರ ಮಹಿಳೆಯರು, ವಿದ್ಯಾರ್ಥಿಗಳು ಉಪಸ್ತಿತರಿದ್ದರು. ಸುರೇಶ ಉರಬಿನಟ್ಟಿ