
3rd December 2024
ಯಳಂದೂರು ಡಿ. 3
ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ ) ವತಿಯಿಂದ ಮತ್ತು ಸರ್ಕಾರಿ ಕಟ್ಟೆ ಕೆರೆ ಅಭಿವೃದ್ಧಿ ಸಮಿತಿ ದಾಸನ ಹುಂಡಿ ಇವರ ಸಯುಕ್ತ ಆಶ್ರಯದಲ್ಲಿ"ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದಡಿಯಲ್ಲಿ ದಾಸನಹುಂಡಿ ಸರ್ಕಾರಿಕಟ್ಟೆ ಕೆರೆ ಪುನಶ್ಚೇತನ ಗೊಳಿಸಲಾದ "757"ನೇ ಕೆರೆಯ ನಾಮಪಲಕ ಅನಾವರಣ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ಬಳಿಕ ಮಾತನಾಡಿದ ಅವರು ಸಂಸ್ಥೆ ವತಿಯಿಂದ ಮಾಡುತ್ತಿರುವ ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಹೊಂದುವ ದೃಷ್ಟಿಯಿಂದ ದಾಸನ ಹುಂಡಿ ಗ್ರಾಮದಲ್ಲಿ ಕೆರೆ ಹಸ್ತಾಂತರಗೊಂಡಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ಊರಿನ ನಾಗರಿಕರು ಪಡೆದು ಕೊಳ್ಳಬೇಕು ಎಂದರು. ಈ ಕೆರೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಅನುದಾನ 2.66 ಲಕ್ಷ ಮಂಜೂರಾತಿ ನೀಡಿದ್ದು ಇದರಲ್ಲಿ 1.57 ಲಕ್ಷ ಖರ್ಚಾಗಿದ್ದು ಹ ಗ್ರಾಮಸ್ಥರು ಪಾಲು 0.75 ಲಕ್ಷ ಆಗಿದ್ದು ಒಟ್ಟು 2.32 ಖರ್ಚಾಗಿದ್ದು ಕೆರೆಯು ಬಹಳ ಸುಂದರವಾಗಿ ಈ ಕೆರೆಯನ್ನು ರೂಪಿಸಲಾಗಿದೆ. ಈ ಕೆರೆಯಲ್ಲಿ ಇರುವಂತಹ ಜೀವಿಗಳು ಕೆರೆ ಜೀವನಾಡಿಯಾಗಿದೆ. ಕೆರೆಯಿಂದ ಜನರು ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಮತ್ತು ಕೆರೆಯ ಸುತ್ತ-ಮುತ್ತಲಿನ ಕೃಷಿ ಜಮೀನುಗಳಿಗೆ ಅಂತರ್ಜಾಲ ಇವೆಲ್ಲವು ಜೀವಂತವಾಗಿ ಇರಬೇಕಾದರೆ ನಾವು ನಮ್ಮ ಊರಿನಲ್ಲಿ ಇರುವ ನಮ್ಮಕೆರೆಗಳನ್ನು ನಾವು ಸುಚಿಯಾಗಿಟ್ಟುಕೊಂಡು ಕೆರೆಯನ್ನು ನಾವುಕಾಪಾಡಿದಾಗ ಮಾತ್ರ ಕೆರೆಯನ್ನು ನಮ್ಮ ಮುಂದಿನಪೀಳಿಗೆಗೂರಕ್ಷಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು
ಈ ಕೆರೆ ಕಾಮಗಾರಿಯಿಂದ ನೀರು ತುಂಬಿದ ನಂತರ ಸುತ್ತಮುತ್ತಲಿನ 18 ಬೋರ್ವೆಲ್ ಗಳು ರಿಚಾರ್ಜ್ ಆಗುತ್ತದೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿನ ಸೌಕರ್ಯ ಸಿಗುತ್ತದೆ ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷರಾದ ಬಾಬು ಡಿ ಸಿ ಮಾತನಾಡಿ ಧರ್ಮಸ್ಥಳ ಯೋಜನೆ ಮಾಡುತ್ತಿರುವ ಹತ್ತು ಹಲವಾರು ಕಾರ್ಯಕ್ರಮಗಳು ಜನಪರ ಕಾರ್ಯಕ್ರಮಗಳು ಈ ಕೆರೆ ಕಾಮಗಾರಿಯಿಂದ ನಮ್ಮ ಗ್ರಾಮದ ಎಲ್ಲ ಸದಸ್ಯರು ನಾವು ಗ್ರಾಮಾಭಿವೃದ್ಧಿ ಯೋಜನೆಯೂ ಗ್ರಾಮೀಣ ಅಭಿವೃದ್ಧಿ ಮಾಡುವ ಸಲುವಾಗಿ ನೀಡುತ್ತಿರುವ ಕೊಡುಗೆಗಳ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು ನಾವು ಎಂದಿಗೂ ಧರ್ಮಸ್ಥಳ ಸಂಸ್ಥೆಗೆ ಸದಾ ಕಾಲ ಚಿರಋಣಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿಕಟ್ಟೆ ಕೆರೆ ಸಮಿತಿ ಅಧ್ಯಕ್ಷರು ಉಪಾಧ್ಯಕ್ಷರುಹಾಗೂ ಸಮಿತಿಯ ಎಲ್ಲ ಸದಸ್ಯರಿಂದ ಗ್ರಾಮಪಂಚಾಯಿತಿಯವರಿಗೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಆನಂದ ಗೌಡ ,ಮಾನ್ಯ ಮೈಸೂರು ಪ್ರಾದೇಶಿಕ ಕಛೇರಿಯ ಕೆರೆ ಅಭಿಯಂತರರಾದ ಪುಷ್ಪರಾಜ್ , ಜ್ಞಾನವಿಕಾಸ ಯೋಜನಾಧಿಕಾರಿಯವರಾದ ಶ್ರೀಮತಿ ಮೂಕಾಂಬಿಕಾ ವಲಯ ಮೇಲ್ವಿಚಾರಕರಾದ ಪ್ರಕಾಶ್ ಮೂರ್ತಿ, ಕೃಷಿ ಮೇಲ್ವಿಚಾರಕರ ಶಿವಕುಮಾರ್ ಮತ್ತು ಕೆರೆ ಅಭಿವೃದ್ಧಿ ಸಮಿತಿ, ಸೇವಾ ಪ್ರತಿನಿಧಿಗಳು ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
3rd December 2024
ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ ಡಿ.15ಕ್ಕೆ ನಿಗಧಿ
ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ ಡಿ.15ಕ್ಕೆ ನಿಗದಿಯಾಗಿದ್ದು, ಈ ಕುರಿತು ವಿವರಗಳನ್ನು ಈಗಾಗಲೇ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಕೃಷಿಕ ಸಮಾಜದ 5 ವರ್ಷಗಳ ಅವಧಿಗೆ ಕಾರ್ಯಕಾರಿ ಸಮಿತಿ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯನ್ನು ಕೃಷಿ ಇಲಾಖೆ ನಡೆಸಲಿದೆ. ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಗೆ ಇಚ್ಚಿಸಿ, ಚುನಾವಣೆಯಲ್ಲಿ ಭಾಗವಹಿಸುವವರು ನ. 30 ರಿಂದ ನಾಮಪತ್ರ ಸ್ವೀಕರಿಸಿ, ಅಂದಿನಿಂದಲೇ ಕಛೇರಿಯಲ್ಲಿ ಸಲ್ಲಿಸಬಹುದಾಗಿದ್ದು, ಡಿ.6 ರಂದು ಸಂಜೆ 5 ಗಂಟೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ ಮತ್ತು ಇದೇ ದಿನ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.
ಅಂತೆಯೇ, ನಾಮಪತ್ರ ಪರಿಶೀಲನೆ ಡಿ.7 ರಂದು ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದ್ದು, ನಂತರದಲ್ಲಿ ತಿರಸ್ಕಾರಗೊಂಡ ನಾಮಪತ್ರಗಳ ವಿವರವನ್ನು ಅಂದೇ ಕಛೇರಿಯಲ್ಲಿ ಪ್ರಕಟಿಸಲಾಗುವುದು. ಡಿ.9 ರಂದು ಮಧ್ಯಾಹ್ನ 3 ಗಂಟೆಯೊಳಗೆ ಉಮೇದುವಾರಿಕೆ ವಾಪಸ್ ಪಡೆಯಬಹುದಾಗಿದೆ. ನಂತರದಲ್ಲಿ ಸಂಜೆ 4.30 ಗಂಟೆಗೆ ಚುನಾವಣಾ ಕಣದಲ್ಲಿ ಉಳಿಯವ ಉಮೇದುವಾರರಿಗೆ ಚಿಹ್ನೆ ಹಂಚಿಕೆ, ಚುನಾಯಿತ ಕ್ರಮ ಸಂಖ್ಯೆ ನೀಡಲಾಗುವುದು.
ಉಳಿದಂತೆ ಚುನಾವಣೆ ಡಿ.15 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮತದಾನ ಪ್ರಕ್ರಿಯೆ ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ ಯಳಂದೂರು ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಚುನಾವಣೆ ನಡೆಯಲಿದೆ ಹಾಗೂ ಮತ ಎಣಿಕೆ ಪ್ರಕ್ರಿಯೆ ಅಂದು ಸಂಜೆ ಒಳಗೆ ಮುಕ್ತಾಯಗೊಂಡು ಫಲಿತಾಂಶವೂ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಗೊಳ್ಳಲಿದೆ. ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯಲ್ಲಿ ಪಾಲ್ಗೊಳ್ಳಲು ಕೃಷಿಕ ಸಮಾಜದ 93 ಅಜೀವ ಸದಸ್ಯರಿದ್ದು, ಇವರು ಮಾತ್ರ ಚುನಾವಣೆಯಲ್ಲಿ ಭಾಗವಹಿಸಬಹುದಾಗಿದೆ. ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎನ್. ಜಿ ಅಮೃತೇಶ್ವರ ನೇಮಕಗೊಂಡಿದ್ದಾರೆ.