

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಕನ್ನಡ ಜ್ಯೋತಿ ಕೆ ರಥಕ್ಕೆ ಹರಪನಹಳ್ಳಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಅದ್ದೂರಿ ಸ್ವಾಗತ
24th October 2024
ಹರಪನಹಳ್ಳಿ.ಅ.22.ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ರಾಜ್ಯದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವು ಹರಪನಹಳ್ಳಿಗೆ ಆಗಮಹಿಸಿತು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ಹರಪನಹಳ್ಳಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ತಾಲೂಕಿನ ಗಡಿಭಾಗ ಕಾನಹಳ್ಳಿಯಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಕೂಲಹಳ್ಳಿ ಮಾರ್ಗವಾಗಿ ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಸೇರಿದಂತೆ ಕನ್ನಡ ತಾಯಿ ಭುವನೇಶ್ವರ ಮೂರ್ತಿಗೆಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಇವೇಳೆ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ ಕನ್ನಡ ನಾಡು.ನುಡಿ ಬಾಷೆ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನವಿರಬೇಕು.ಕನ್ನಡ ಬಾಷೆ ಬೆಳಸುವಲ್ಲಿಕಂಕಣಬದ್ದರಾಗಿ ನಿಲ್ಲಬೇಕು.ಕನ್ನಡ ಬಾಷೆ ಉಳಿಸುವ ಬೆಳೆಸುವ ಇಂತಹ ಕಾರ್ಯಕ್ರಮವು ಎಲ್ಲರಲ್ಲೂ ಸಂತಸ ತಂದಿದೆ ಎಂದರು.
ಕನ್ನಡ ಜ್ಯೋತಿ ರಥವನ್ನು ಪಟ್ಟಣದ ಪ್ರವಾಸಿಮಂದಿರದಿಂದ ಆರಂಬಿಸಿ ಹಳೇಬಸ್ ನಿಲ್ದಾಣ. ಪುರಸಭೆ ವೃತ್ತ. ಇಜಾರಿಶಿರಸಪ್ಪ ವೃತ್ತ. ಹೊಸಬಸ್ ನಿಲ್ದಾಣ. ರಾಜಸೋಮಶೇಖರನಾಯಕ ವೃತ್ತ. ಗುಂಡಿನಕೇರಿ. ತೆಕ್ಕದ ಗರಡಿಕೇರಿ. ವಾಲ್ಮೀಕಿನಗರಕ್ಕೆ ತಲುಪಿ ಸಂಪನ್ನಗೊಂಡಿತು.
ಕನ್ನಡ ಜ್ಯೋತಿ ರಥದ ಮೇರವಣಿಗೆಯಲ್ಲಿ ಡೊಳ್ಳು ಕುಣಿತ.ತಾಷೆ ರಾಮ್ಡೋಲ್ ಸೇರಿದಂತೆ ಹಲವು ಕಲಾ ವಾದ್ಯಗಳು ಸಾಂಸ್ಕ್ರಿತಿಕ ಮೆರಗು ತಂದವು.
ಈ ಸಂದರ್ಭದಲ್ಲಿ ತಹಶಿಲ್ದಾರ ಗಿರೀಶಬಾಬು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕುಅದ್ಯಕ್ಷ ಕೆ.ಉಚ್ಚೆಂಗೆಪ್ಪ.,ಮಾಜಿ ಅದ್ಯಕ್ಷರಾದ ಎಚ್.ಮಲ್ಲಿಕಾರ್ಜುನ, ಕಾರ್ಯದರ್ಶಿ ಜಿ.ಮಹದೇವಪ್ಪ, ಖಾಜಾಂಚಿ ಕೆ
.ರಾಘವೇಂದ್ರಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅದ್ಯಕ್ಷ ಗಿರಿಜ್ಜಿನಾಗರಾಜ,ನಂದೀಶ ಆಚಾರಿ,ಕೆ.ನಂದೀಶ, ಅಶೋಕ, ಸಾಹಿತಿ ಮಾಡ್ಲಗೇರಿ ಸುಭದ್ರಮ್ಮ,ಪ್ರಭಾವತಿ ಕೃಷ್ಣಪ್ಪ. ಇಸ್ಮಾಯಿಲ್ ಎಲಿಗಾರ್, ಪೂಜಾರ್ ಬಸವರಾಜ, ಜಿಟ್ಟಿನಕಟ್ಟಿ ಎಚ್.ಕೆ.ಮಂಜುನಾಥ,ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ. ಲಾಟಿ ದಾದಪೀರ್,ಉದ್ದಾರ್ ಗಣೇಶ.ಜಾಕೀರ್, ಟಿ.ವೆಂಕಟೇಶ.ಮುಖಂಡರಾದ ಚಿಕ್ಕೇರಿ ಬಸಪ್ಪ. ಅರಸಿಕೇರಿ ಜಾವೀದ್, ಪ್ರಕಾಶಗೌಡ್ರು ,ತಾಲೂಕು ಪರಿಶಿಷ್ಟ ವರ್ಗಗಳ.ಅಜ್ಜಯ್ಯ, ಕಲ್ಯಾಣಾಧಿಕಾರಿ ಇಬ್ರಾಹಿಂ ಸಾಬ್ ,ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಹೆಚ್ ಲೇಪಾಕ್ಷಪ್ಪ ಸೇರಿದಂತೆ ಇತರರು ಇದ್ದರು.