ಏಜೆನ್ಸಿಗಳುಇಂದು ಬೆಂಗಳೂರಿನಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬಲಗೈ ಪಂಗಡಗಳ ಒಕ್ಕೂಟ ಬೀದರ ಜಿಲ್ಲೆ ವತಿಯಿಂದ ಭೇಟಿ ಮಾಡಿ ರಾಜ್ಯದ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ಇದನ್ನು ನೂತನ ಜನಗಣತಿ ಮಾಡಿ ಅದರ ಅದರ ಮೇಲೆ ಒಳ ಮೀಸಲಾತಿ ಜಾರಿ ಮಾಡಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವುದನ್ನು ತಡೀಬೇಕು ಎಂದು ಒತ್ತಾಯಿಸಿದೆವು. ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರವಾದ) ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬಲಗೈ ಪಂಗಡಗಳ ಒಕ್ಕೂಟದ ಬೀದರ ಅಧ್ಯಕ್ಷರಾದ ಶ್ರೀ ಅನೀಲಕುಮಾರ ಬೆಲ್ದಾರ, ರಮೇಶ ಡಾಕುಳಗಿ, ಶಿವಕುಮಾರ ನೀಲೀಕಟ್ಟಿ, ಸಂದೀಪ ಕಾಂಟೆ, ಪ್ರದೀಪ ನಾಟೀಕರ, ಸಾಯಿ ಸಿಂಧೆ, ಗೌತಮ ಪ್ರಸಾದ, ರಮೇಶ ಮಂದಕನಳ್ಳಿ, ಮಹೇಂದ್ರ ಕುಮಾರ ಹೊಸಮನಿ, ಸಂಗಮೇಶ ಭಾವಿದೊಡ್ಡಿ, ಶಿವರಾಜ ಸಾಗರ, ರಾಜಕುಮಾರ ಕಾಟೆ, ಅಮರನಾಥ ಹುಡುಗೆ, ಲಕ್ಷ್ಮಣ ಹೊನ್ನಡಿ ಸೇರಿದಂತೆ ಇತರರು ಹಾಜರಿದ್ದರು.
24th March 2025